Thursday, February 23, 2017

* ಸೆಲ್ಯೂಲರ್ ಜೈಲ್ *
(CELLULER JAIL)
                                                                                                         
( ಸೆಲ್ಯೂಲರ್ ಜೈಲ್ ನ ಮಾಹಿತಿಯೊಂದಿಗೆ ಇತ್ತೀಚಿನ ಸಮಾಜದ ಅಹಿತಕಾರಿ ಬೆಳವಣಿಗೆಯ ಬಗ್ಗೆ ಸಣ್ಣ ವಿಶ್ಲೇಷಣೆ)
                                                                                                          - MANU GOWTHALLY


          ಸ್ನೇಹಿತರೇ ನೀವು ಸೆಲ್ಯೂಲರ್ ಜೈಲ್ ಬಗ್ಗೆ ತಿಳಿದಿದ್ದೀರಾ ಎಂದು ತಿಳಿದುಕೊಳ್ಳುತ್ತೇನೆ . ಸೆಲ್ಯೂಲರ್ ಜೈಲ್ ಗ್ರೇಟ್ ಅಂಡಮಾನ್ ದ್ವೀಪದಲ್ಲಿರುವ ಅತ್ಯಂತ ಕ್ರೂರವಾದ ಜೈಲಾಗಿತ್ತು. ಇದನ್ನು "ಕಾಲಾಪಾನಿ" ಎಂಬುದಾಗಿಯೂ ಕರೆಯಲಾಗುತ್ತದೆ.
       ಇದನ್ನು ಬ್ರಿಟಿಷರ ಕಾಲದಲ್ಲಿ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರನ್ನು ಶಿಕ್ಷಿಸುವ ಸಲುವಾಗಿಯೇ ಸುತ್ತಲೂ ಸಮುದ್ರದಿಂದ ಆವೃತ್ತವಾಗಿರುವ  ಭಾರತದ ವಸಾಹತುಶಾಹಿಯಾದ ಅಂಡಾಮಾನ್ ನಿಕೋಬರ್ ದ್ವೀಪದಲ್ಲಿ ನಿರ್ಮಾಣ ಮಾಡಲಾಗಿತ್ತು.
        ಈ ಸೆಲ್ಯೂಲರ್ ಜೈಲ್ ನ್ನು 1896 ರಿಂದ 1906 ರ ನಡುವೆ ನಿರ್ಮಾಣ ಮಾಡಲಾಗಿತ್ತಾದರೂ 1857ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಪರಿಣಾಮದ ದಿನಗಳಿಂದ ಜೈಲುಗಳಾಗಿ ಅಂಡಮಾನ್ ನಿಕೋಬರ್ ದ್ವೀಪಗಳನ್ನು ಬಳಸಲಾಗುತ್ತಿತ್ತು.
      ಈ ಜೈಲ್ ನ ರಚನೆ ಹೇಗಿತ್ತೆಂದರೆ ಇಲ್ಲಿ ಒಬ್ಬ ಖೈದಿ ಇನ್ನೊಬ್ಬ ಖೈದಿಯನ್ನು ಸಂವಹನ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ. ಅವರು ಏಕಾಂಗಿಯಾಗಿಯೇ ಕನಿಷ್ಠ ಜೀವನ ಸಾಗಿಸಬೇಕಾಗಿತ್ತು. ಈ ಜೈಲ್ ನಲ್ಲಿ ಖೈದಿಗಳಿಗೆ ಯಾವೆಲ್ಲಾ ಶಿಕ್ಷೆಗಳನ್ನು ವಿಧಿಸುತ್ತಿದ್ದರು ಎಂಬುದನ್ನು ವೀಕ್ಷಿಸಿದರೆ ನೀವೆ ಒಂದು ಬಾರಿ ಈ ರೀತಿಯ ಜೀವನವನ್ನು ಕೂಡ ಭಾರತೀಯರು ಅನುಭವಿಸಿದ್ದಾರೆಯೇ ಎಂಬುವಂತಹ ಬ್ರಾಂತಿ ನಿಮ್ಮನ್ನು ಆವರಿಸಿಕೊಳ್ಳುವುದರಲ್ಲಿ ಸಂದೇಹವಿಲ್ಲ.



            ಇಂತಹ ಶಿಕ್ಷೆಯನ್ನು ಅನುಭವಿಸಿದವರಲ್ಲಿ ಪ್ರಮುಖರೆನಿಸಿಕೊಂಡವರೆಂದರೆ ವಿನಾಯಕ ದಾಮೋದರ ಸಾವರ್ಕರ್, ದಿವಾನ್ ಸಿಂಗ್, ಯೋಗೆಂದ್ರ ಶುಕ್ಲ  ಇನ್ನಿತರರು . ಇದೇ ಜೈಲಿನಲ್ಲಿ ವಿವಿಧ ಸೆಲ್ ನಲ್ಲಿ ಬಂಧಿತರಾಗಿದ್ದು ಸಾವರ್ಕರ್ ಸಹೋದರರಿಗೆ ಇಬ್ಬರು ಕೂಡ ಇದೇ ಜೈಲಿನಲ್ಲಿದ್ದೇವೆ ಎಂಬ ಮಾಹಿತಿ ಇರಲಿಲ್ಲ. ಅಷ್ಟರ ಮಟ್ಟಿಗೆ ಕ್ರೂರಯುತವಾದ ಶಿಕ್ಷೆಯನ್ನು ಜೈಲಿನಲ್ಲಿ ವಿಧಿಸಲಾಗುತ್ತಿತ್ತು.
         ಸ್ನೇಹಿತರೇ ನಾನು ಹೇಳುವುದಿಷ್ಟೇ ಈ ರೀತಿ ದೇಶಕ್ಕಾಗಿ, ದೇಶದ ಜನತೆಗಾಗಿ ತಮ್ಮ ಪ್ರಾಣವನ್ನೇ ಪಣತೊಟ್ಟು ವೀರರಾಗಿ ಮಡಿದ ಭಗತ್ ಸಿಂಗ್ ಆಗಿರಬಹುದು, ಆಜಾದ್ ಚಂದ್ರಶೇಖರ್ ಇರಬಹುದು, ಸುಖದೇವ್ ಆಗಿರಬಹುದು, ರಾಜಗುರು ಆಗಿರಬಹುದು ಇವರೆಲ್ಲಾ ದೇಶಕ್ಕಾಗಿ ತಮ್ಮ ಪ್ರಾಣವನ್ನೆ ಇಳಿವಯಸ್ಸಿನಲ್ಲಿಯೇ ತ್ಯಜಿಸಿದವರು.
ಭಗತ್ ಸಿಂಗ್ ಮರಣ ಹೊಂದುವಾಗ ಅವರ ವಯಸ್ಸು 21, ಚಂದ್ರಶೇಖರ್ ಆಜಾದ್ ಮರಣಹೊಂದುವಾಗ ಅವರ ವಯಸ್ಸು 24.  ಹೀಗೆ ದೇಶಕ್ಕಾಗಿ ಸ್ವಾತಂತ್ರ್ಯಕ್ಕಾಗಿ ಇವರೆಲ್ಲಾ ತಮ್ಮ ಪ್ರಾಣವನ್ನೆ ಅಂದು ತ್ಯಜಿಸಿದ್ದಾರೆ. ಇಂದಿಗೂ ನಮ್ಮ ಸೈನಿಕರು ದೇಶಕ್ಕಾಗಿ ಗಡಿಯಲ್ಲಿ ಹೋರಾಡುತ್ತಿದ್ದಾರೆ. 
         ನನ್ನ ವಾದ ಇಷ್ಟೇ ಇತ್ತೀಚಿನ ಬೆಳೆವಣಿಗೆಯಂತೆ ಸಮಾಜದಲ್ಲಿ ಅತ್ಯಾಚಾರ, ಕೊಲೆ, ದರೋಡೆ, ಕಳ್ಳತನಗಳಂತಹ ನೀಚ ಕೃತ್ಯಗಳನ್ನು ಹೆಚ್ಚು ಮಾಡುತ್ತಿರುವವರನ್ನು ಇನ್ನೂ ಇಳಿವಯಸ್ಸಿನ ಯುವಕರು. ಇದು ಬದಲಾಗಬೇಕು, ಅಂದು ದೇಶಕ್ಕಾಗಿ ಹೋರಾಡಿದ ವೀರ ತ್ಯಾಗಿಗಳನ್ನು ನೆನೆಯಬೇಕು. ಅವರಂತೆ ಸಮಾಜಕ್ಕಾಗಿ , ದೇಶಕ್ಕಾಗಿ ಪ್ರಾಣಕೊಡುವುದಂತೂ ಬೇಡ ಆದರೆ ಬೇರುಬ್ಬರ ಪ್ರಾಣಕ್ಕೆ ಮಾರಕ, ಬೇರೊಬ್ಬರ ಮಾನಕ್ಕೆ ಮಾರಕರಾಗುವುದನ್ನು ನಿಲ್ಲಿಸಬೇಕು. ಉತ್ತಮ ಮೌಲ್ಯಗಳಿಂದ ಕೂಡಿದ  ಉತ್ತಮ ಸಮಾಜ ಕಟ್ಟುವ ಕಾರ್ಯ ನಡೆಯಬೇಕು. ಆಗ ಮಾತ್ರ ಸಮಾಜದಲ್ಲಿ, ದೇಶದಲ್ಲಿ ಒಬ್ಬ ಎಂದೆಂದಿಗೂ ಜನರ ಮನಸ್ಸಲ್ಲಿ ನೆನಪಿನಲ್ಲಿರುವ ವ್ಯಕ್ತಿಯಾಗಿ ಉಳಿಯಲು ಸಾಧ್ಯ ಎನ್ನುವುದು ನನ್ನ ಭಾವನೆ.

                                                                                                                   ಇಂತಿ ತಮ್ಮ
MANU S GOWTHALLY
Visit : manugowthally.blogspot.in
Subscribe : manugowthally/youtube.com
                    Manu gowthally/facebook.com





karnataka Budget 2021

ಕರ್ನಾಟಕ ರಾಜ್ಯದ 2021ನೇ ಸಾಲಿನ ಆಯವ್ಯಯದ ಪ್ರಮುಖ ಅಂಶಗಳು ಈ ಕೆಳಗಿನ ಮಾಹಿತಿಯಲ್ಲಿದೆ  ವೀಕ್ಷಿಸಿ.. ...